ರವಿಚಂದ್ರನ್ ಅಶ್ವಿನ್ ಬೆನ್ನಿಗೆ ಚೂರಿ ಇರಿದರು ಎಂದ ಬಿಸಿಸಿಐ ಅಧಿಕಾರಿ

ಬುಧವಾರ, 27 ಮಾರ್ಚ್ 2019 (08:54 IST)
ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಮಾಂಕಡೆಡ್ ಔಟ್ ಮಾಡಿದ ರವಿಚಂದ್ರನ್ ಅಶ್ವಿನ್ ವಿರುದ್ಧ ಈಗ ಟೀಕೆಗಳ ಸುರಿಮಳೆಯಾಗುತ್ತಿದೆ.


ಕ್ರೀಡಾ ಸ್ಪೂರ್ತಿ ಮೆರೆಯಲಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ಬೆಂಬಲಿಗರು, ನಾಯಕ ಅಜಿಂಕ್ಯಾ ರೆಹಾನೆ ಸೇರಿದಂತೆ ಹಲವರು ಜರೆದಿದ್ದಾರೆ. ಇತ್ತ ಬಿಸಿಸಿಐ ಅಧಿಕಾರಿಯೊಬ್ಬರು ಅಶ್ವಿನ್ ಮಾಡಿದ್ದು, ಬೆನ್ನಿಗೆ ಚೂರಿ ಇರಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಶ್ವಿನ್ ಈ ಘಟನೆಗೆ ದುಬಾರಿ ಬೆಲೆ ತೆರೆಬೇಕಾದ ಪರಿಸ್ಥಿತಿ ಬರಬಹುದು ಎಂದೇ ಲೆಕ್ಕಾಚಾರ ಹಾಕಲಾಗಿದೆ.

ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾದ ಅಶ್ವಿನ್ ಬಾಲ್ ಎಸೆಯುವಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಜೋಸ್ ಬಟ್ಲರ್ ರನ್ನು ರನೌಟ್ ಮಾಡಿದ್ದರು. ಕ್ರಿಕೆಟ್ ನಿಯಮವಾಳಿಗಳ ಪ್ರಕಾರ ಇದು ಸರಿ. ಆದರೆ ನೈತಿಕವಾಗಿ ಅಶ್ವಿನ್ ಮಾಡಿದ್ದು ಸರಿಯಲ್ಲ ಎಂದು ಕ್ರಿಕೆಟ್ ಲೋಕ ಆಕ್ರೋಶ ವ್ಯಕ್ತಪಡಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ