ಗಂಗೂಲಿ, ದ್ರಾವಿಡ್ ಕೂಡಾ ವಿಶ್ವಕಪ್ ಗೆದ್ದಿಲ್ಲ: ರವಿಶಾಸ್ತ್ರಿ

ಮಂಗಳವಾರ, 25 ಜನವರಿ 2022 (17:01 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಐಸಿಸಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು ಎಂದು ಟೀಕೆ ಮಾಡುವವರಿಗೆ ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು ನೀಡಿದ್ದಾರೆ.

ಕೊಹ್ಲಿ ತಮ್ಮ ಆರು ವರ್ಷದ ಅವಧಿಯಲ್ಲಿ ಭಾರತಕ್ಕೆ ಒಂದೇ ಒಂದು ವಿಶ್ವಕಪ್ ಆಥವಾ ಐಸಿಸಿ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. ಆದರೆ ಇದರ ಅರ್ಥ ಕೊಹ್ಲಿ ಉತ್ತಮ ನಾಯಕನಲ್ಲ ಎಂದು ಅಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

‘ಸಚಿನ್ ತೆಂಡುಲ್ಕರ್ ಗೆ ಒಂದು ವಿಶ್ವಕಪ್ ಗೆಲ್ಲಲು ಆರು ವಿಶ್ವಕಪ್ ಆಡಬೇಕಾಯಿತು. ಗಂಗೂಲಿ, ದ್ರಾವಿಡ್, ಲಕ್ಷ್ಮಣ್ ಕೂಡಾ ವಿಶ್ವಕಪ್ ಗೆದ್ದಿಲ್ಲ. ಅದರ ಅರ್ಥ ಇವರೆಲ್ಲಾ ಕೆಟ್ಟ ಆಟಗಾರರು ಎಂದಲ್ಲ. ಸದ್ಯಕ್ಕೆ ನಮ್ಮಲ್ಲಿ ವಿಶ್ವಕಪ್ ವಿಜೇತ ನಾಯಕರು ಎಂದಿರುವುದು ಇಬ್ಬರು ಮಾತ್ರ’ ಎಂದು ರವಿಶಾಸ್ತ್ರಿ ಕೊಹ್ಲಿ ಪರವಾಗಿ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ