ಇಂಗ್ಲೆಂಡ್ ಕ್ರಿಕೆಟಿಗರ ಮೇಲೆ ಚೆಂಡು ವಿರೂಪ ಆರೋಪ

ಸೋಮವಾರ, 16 ಆಗಸ್ಟ್ 2021 (09:37 IST)
ಲಾರ್ಡ್ಸ್: ಭಾರತದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಚೆಂಡು ವಿರೂಪಗೊಳಿಸಿದ ಆರೋಪಕ್ಕೊಳಗಾಗಿದ್ದಾರೆ.
Photo Courtesy: Google


ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇಂಗ್ಲೆಂಡ್ ಆಟಗಾರರು ಕಾಲಿನಲ್ಲಿ ಬಾಲ್ ತುಳಿದು ಚೆಂಡು ವಿರೂಪಗೊಳಿಸಲು ಯತ್ನಿಸಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇಲ್ಲೇನಾಗ್ತಿದೆ? ಚೆಂಡು ವಿರೂಪವೇ? ಕೊರೋನಾಗೆ ಮುನ್ನೆಚ್ಚರಿಕೆಯ ಕ್ರಮವೇ? ಎಂದು ಸೆಹ್ವಾಗ್ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಆದರೆ ಸೆಹ್ವಾಗ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ತಮ್ಮ ಆಟಗಾರರನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಘಟನೆಯಷ್ಟೇ. ಬಾಲ್ ಟ್ಯಾಂಪರಿಂಗ್ ಅಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ