ರವಿಶಾಸ್ತ್ರಿ ಮೇಲೆ ಹರಿಹಾಯ್ದ ಗಂಗೂಲಿ: ಮತ್ತೆ ಶುರುವಾಗುತ್ತಾ ಮಾಜಿಗಳ ವಾರ್?

ಬುಧವಾರ, 5 ಸೆಪ್ಟಂಬರ್ 2018 (09:06 IST)
ಮುಂಬೈ: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಮಾಜಿ ನಾಯಕ ಸೌರವ್ ಗಂಗೂಲಿ ಕೋಚ್ ರವಿಶಾಸ್ತ್ರಿ ವಿರುದ್ಧ ಹರಿಹಾಯ್ದಿದ್ದಾರೆ.

ಹಿಂದೊಮ್ಮೆ ಕೋಚ್ ಆಯ್ಕೆ ವಿಚಾರದಲ್ಲಿ ಈ ಇಬ್ಬರೂ ಮಾಜಿ ಕ್ರಿಕೆಟಿಗರು ಬಹಿರಂಗವಾಗಿಯೇ ವಾಕ್ಸಮರ ನಡೆಸಿದ್ದರು. ಬಳಿಕ ರವಿಶಾಸ್ತ್ರಿಯನ್ನು ಗಂಗೂಲಿ, ಸಚಿನ್ ಮತ್ತು ಲಕ್ಷ್ಮಣ್ ಒಳಗೊಂಡ ಕ್ರಿಕೆಟ್ ಸಮಿತಿ ಕೋಚ್ ಆಗಿ ಆಯ್ಕೆ ಮಾಡಿತ್ತು. ಆಗ ರವಿಶಾಸ್ತ್ರಿ ತಮ್ಮ ನಡುವಿನ ವೈಮನಸ್ಯ ಮುಗಿದ ಅಧ್ಯಾಯ ಎಂದಿದ್ದರು.

ಆದರೆ ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೆ ರವಿಶಾಸ್ತ್ರಿಯೇ ಜವಾಬ್ದಾರಿ ಹೊರಬೇಕು. ಮುಖ್ಯ ಕೋಚ್ ಆಗಿ ಟೀಂ ಇಂಡಿಯಾ ಸೋತಿದ್ದಕ್ಕೆ ರವಿಶಾಸ್ತ್ರಿ ಉತ್ತರ ನೀಡಬೇಕು. ಹಾಗೆಯೇ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡಾ ಯಾಕೆ ತಂಡ ಒಬ್ಬನೇ ಬ್ಯಾಟ್ಸ್ ಮನ್ ಮೇಲೆ ಡಿಪೆಂಡ್ ಆಗಿದೆ ಎಂದು ಉತ್ತರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಗಂಗೂಲಿ ಈ ಹೇಳಿಕೆ ಮತ್ತೆ ಮಾಜಿಗಳ ಫೈಟ್ ಗೆ ಕಾರಣವಾಗುತ್ತಾ?

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ