‘ಇಷ್ಟೊಂದು ವಾಯುಮಾಲಿನ್ಯವಿರುವಲ್ಲಿ ಯಾಕ್ರೀ ಕ್ರಿಕೆಟ್ ಪಂದ್ಯ ಆಯೋಜಿಸ್ತೀರಿ?’

ಸೋಮವಾರ, 4 ಡಿಸೆಂಬರ್ 2017 (08:21 IST)
ದೆಹಲಿ: ಶ್ರೀಲಂಕಾ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ವಾಯು ಮಾಲಿನ್ಯದಿಂದಾಗಿ ಲಂಕಾ ಆಟಗಾರರು ಮೂಗು ಮುಚ್ಚಿಕೊಂಡು ಆಡುತ್ತಿದ್ದಾರೆ. ಇದರ ವಿರುದ್ಧ ಲಂಕಾ ಕ್ರಿಕೆಟ್ ಮಂಡಳಿ ಗರಂ ಆಗಿದೆ.
 

ದೆಹಲಿಯಲ್ಲಿ ಇಷ್ಟೊಂದು ವಾಯು ಮಾಲಿನ್ಯವಿದೆ ಎಂದು ಗೊತ್ತಿದ್ದರೂ ಇಂತಹ ಸ್ಥಳದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಿರುವುದು ಏಕೆ ಎಂದು ಲಂಕಾ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ಮಂಡಳಿಗೆ ಪ್ರಶ್ನಿಸಿದೆ.

ನಿನ್ನೆಯ ದಿನ ಭಾರತ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಲಂಕಾ ಹಲವು ಬಾರಿ ವಾಯು ಮಾಲಿನ್ಯದ ನೆಪವೊಡ್ಡಿ ಪಂದ್ಯ ನಿಲ್ಲಿಸಿತ್ತು. ಇದರಿಂದ ಸಿಟ್ಟಿಗೆದ್ದ ಟೀಂ ಇಂಡಿಯಾ ನಾಯಕ ಅರ್ಧಕ್ಕೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಈ ವಿಷಯವೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ