ಸರಣಿ ರದ್ದುಗೊಳಿಸಿ ಭಾರತಕ್ಕೆ ಮರಳಲು ಟೀಂ ಇಂಡಿಯಾಗೆ ಸಲಹೆ

ಮಂಗಳವಾರ, 14 ಆಗಸ್ಟ್ 2018 (09:31 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿರುವ ಟೀಂ ಇಂಡಿಯಾಗೆ ಅಭಿಮಾನಿಗಳು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಹೀನಾಯವಾಗಿ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ ಮೇಲೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೇ ಸರಣಿ ರದ್ದುಗೊಳಿಸಿ ಭಾರತಕ್ಕೆ ಮರಳಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಈ ರೀತಿ ಇಂಗ್ಲೆಂಡ್ ನಲ್ಲಿ ಅವಮಾನ ಅನುಭವಿಸುವುದಕ್ಕಿಂತ ಭಾರತ ಅರ್ಧಕ್ಕೇ ಸರಣಿ ನಿಲ್ಲಿಸಿ ಮರಳುವುದು ಒಳಿತು. ಏಕದಿನ ಸರಣಿ ಸೋತಾಗ ಧೋನಿಯನ್ನು ಧೂಷಿಸುವವರು ಈಗ ಎಲ್ಲಿ ಹೋದರೋ. ಮರಳಿ ವಿಜಯ್, ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ಯಾರೂ ಆಡಲು ಲಾಯಕ್ಕಿಲ್ಲ ಎಂದು ಅಭಿಮಾನಿಗಳು ಬಾಯಿಗೆ ಬಂದ ಹಾಗೆ ಜರಿಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ