ಭಾರತದವ್ರು ಕೈಕುಲುಕಿಲ್ಲ, ಅದಕ್ಕೇ ನಾವೂ ಹೀಗೆ ಸೇಡು ತೀರಿಸಿಕೊಂಡ್ವಿ: ಪಾಕಿಸ್ತಾನ ಕೋಚ್ ಹೇಳಿಕೆ
ಪಂದ್ಯದ ಬಳಿಕ ನಾವು ಭಾರತೀಯ ಆಟಗಾರರಿಗೆ ಕಾಯುತ್ತಿದ್ದೆವು. ಅವರು ಕೈಕುಲುಕಲು ಬರಬಹುದು ಎಂದು ಅಂದುಕೊಂಡಿದ್ದೆವು. ಆದರೆ ಅವರು ಬರದೇ ಪೆವಿಲಿಯನ್ ಗೆ ಹೋದರು. ಹೀಗಾಗಿ ನಮಗೆ ನಿರಾಶೆಯಾಯಿತು. ಇದೇ ಕಾರಣಕ್ಕೆ ಸಲ್ಮಾನ್ ಅಘಾ ಕೂಡಾ ಹಾಗೆ ಮಾಡಬೇಕಾಯಿತು ಎಂದಿದ್ದಾರೆ.
ಈ ಮೂಲಕ ಪಾಕಿಸ್ತಾನ ಕೂಡಾ ನಾವು ತಿರುಗೇಟು ನೀಡಿದ್ದಾಗಿ ಹೇಳಿಕೊಂಡಿದೆ. ಈ ವಿಚಾರ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಪಾಕಿಸ್ತಾನ ಮಾಧ್ಯಮಗಳು ಇದು ನಮ್ಮ ದೇಶಕ್ಕೇ ಮಾಡಿದ ಅವಮಾನ ಎಂದು ಬಣ್ಣಿಸಿವೆ.