ಕ್ರಿಕೆಟ್ ಬಿಟ್ಟು ಬೇರೇನೂ ಬೇಕಿಲ್ಲವಂತೆ ನಾಯಕ ಕೊಹ್ಲಿಗೆ!

ಬುಧವಾರ, 26 ಜುಲೈ 2017 (09:06 IST)
ಗಾಲೆ: ಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಸುದೀರ್ಘ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ, ಕ್ರಿಕೆಟ್ ಬಿಟ್ಟು ಬೇರೇನೂ ವಿವಾದ ಬೇಕಿಲ್ಲವಂತೆ.


ಇತ್ತೀಚೆಗೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಜತೆಗಿನ ವಿವಾದ ಮತ್ತು ಹೊಸದಾಗಿ ನೇಮಕಗೊಂಡಿರುವ ರವಿಶಾಸ್ತ್ರಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದ್ದಾರೆ.

‘ಕೋಚ್ ವಿವಾದದ ಬಗ್ಗೆ ನಾವು ಚಿಂತೆ ಮಾಡುತ್ತಿಲ್ಲ. ನಮ್ಮ ಗಮನವೇನಿದ್ದರೂ ಕ್ರಿಕೆಟ್ ಕಡೆಗೆ. ರವಿ ಶಾಸ್ತ್ರಿ ಜತೆಗೆ ಹಿಂದೆ ಉತ್ತಮ ಬಾಂಧವ್ಯ ಹೊಂದಿದ್ದೆವು. ಅದೇ ಮತ್ತೆ ಈ ಸಂದರ್ಭದಲ್ಲೂ ಮುಂದುವರಿಯಬಹುದೆಂದು ಆಶಿಸಿದ್ದೇವೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಈಗ ಟೀಂ ಇಂಡಿಯಾ ನಾಯಕ ಎಲ್ಲೇ ಹೋದರೂ, ಇದೇ ಪ್ರಶ್ನೆ ಎದುರಾಗುತ್ತದೆ. ಬಹುಶಃ ಕೊಹ್ಲಿ ಸಾಹೇಬರಿಗೂ ಉತ್ತರಿಸಿ ಸಾಕಾಗಿರಬಹುದು. ಹಾಗಾಗಿ ಈ ಬಗ್ಗೆ ಪ್ರಶ್ನೆಯೇ ಬೇಡ ಎಂದಿದ್ದಾರೆ ಪಾಪ. ಸದ್ಯಕ್ಕೆ ನಮ್ಮ ತಂಡದ ಸದಸ್ಯರೊಳಗೆ ಅದ್ಭುತ ಒಗ್ಗಟ್ಟು ಇದೆ. ಇದು ಹೀಗೇ ಮುಂದುವರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ..  ರಮಾನಾಥ್ ರೈ ಹೋಮ್ ಮಿನಿಸ್ಟ್ರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ