ಸಿಎಸ್ ಕೆ ಧೋನಿ ಫಿಟ್ನೆಸ್ ಚಿಂತೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ!

ಸೋಮವಾರ, 22 ಏಪ್ರಿಲ್ 2019 (07:30 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಫಿಟ್ನೆಸ್ ಚಿಂತೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿಗೆ ಶುರುವಾಗಿದೆ.


ಅದಕ್ಕೆ ಕಾರಣ ವಿಶ್ವಕಪ್ ಕ್ರಿಕೆಟ್. ಐಪಿಎಲ್ ಏನೋ ಈಗ ಮುಗಿದು ಹೋಗುತ್ತದೆ. ಆದರೆ ಐಪಿಎಲ್ ಮುಗಿದ ಬಳಿಕ ವಿಶ್ವಕಪ್ ಕ್ರಿಕೆಟ್ ಇದ್ದು, ಇದು ಎಲ್ಲಾ ದೇಶದ ಕ್ರಿಕೆಟ್ ತಂಡಕ್ಕೂ ಮಹತ್ವದ ಟೂರ್ನಿಯಾಗಿದೆ.

ಈ ಟೂರ್ನಿಗೆ ಪ್ರಮುಖ ಆಟಗಾರರು ಗಾಯಗೊಂಡು ಪೆವಿಲಿಯನ್ ನಲ್ಲಿ ಕೂರುವಂತಾದರೆ ವಿಶ್ವಕಪ್ ಗೆಲ್ಲುವುದು ಕಷ್ಟ. ಅದರಲ್ಲೂ ಧೋನಿಯಂತಹ ಬುದ್ಧಿವಂತಿಕೆಯ ಕ್ರಿಕೆಟಿಗ ಇಲ್ಲದೇ ಹೋದರೆ ಕೊಹ್ಲಿಗೆ ಬಲಗೈ ಕಳೆದುಕೊಂಡಂತೆ. ಹೀಗಾಗಿ ಐಪಿಎಲ್ ಪಂದ್ಯದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ಧೋನಿ ಗಾಯ ಮರುಕಳಿಸದಿರಲಿ ಎಂದು ಕೊಹ್ಲಿ ಪ್ರಾರ್ಥಿಸುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ