ವಿಜಯ್ ಶಂಕರ್ ಗೆ ಕೊಕ್ ಕೊಡಿ ಎಂದು ರವಿಶಾಸ್ತ್ರಿ, ವಿರಾಟ್ ಕೊಹ್ಲಿಗೆ ಮನವಿ ಮಾಡಿದ ಕೆವಿನ್ ಪೀಟರ್ಸನ್

ಭಾನುವಾರ, 30 ಜೂನ್ 2019 (09:28 IST)
ಲಂಡನ್: ಟೀಂ ಇಂಡಿಯಾದಲ್ಲಿ ಇದೀಗ ಕಳಪೆ ಪ್ರದರ್ಶನದಿಂದಾಗಿ ಆಲ್ ರೌಂಡರ್ ವಿಜಯ್ ಶಂಕರ್ ಸಾಕಷ್ಟು ಟೀಕೆಗೊಳಗಾಗುತ್ತಿದ್ದಾರೆ.


ಕಳೆದ ಎರಡೂ ಪಂದ್ಯಗಳಲ್ಲಿ ಅವರು ಬ್ಯಾಟ್ ಅಥವಾ ಬೌಲಿಂಗ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದರಿಂದಾಗಿ ಭಾರತದ ಮಧ್ಯಮ ಕ್ರಮಾಂಕ ಪೇಲವವಾಗಿದೆ. ಇದೀಗ ವಿಜಯ್ ರನ್ನು ಕೈ ಬಿಡಲು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮನವಿ ಮಾಡಿದ್ದಾರೆ.

ರವಿಶಾಸ್ತ್ರಿ ಮತ್ತು ಕೊಹ್ಲಿಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಪೀಟರ್ಸನ್ ದಯವಿಟ್ಟು ವಿಜಯ್ ಶಂಕರ್ ರನ್ನು ತಂಡದಿಂದ ಕೈಬಿಡಿ ಎಂದಿದ್ದಾರೆ. ಇದೀಗ ಭಾರತದಲ್ಲೂ ವಿಜಯ್ ಶಂಕರ್ ಪ್ರದರ್ಶನದ ಬಗ್ಗೆ ಟೀಕೆ ಕೇಳಿಬರುತ್ತಿದ್ದು, ಅವರ ಬದಲು ದಿನೇಶ್ ಕಾರ್ತಿಕ್‍ ಅಥವಾ ರಿಷಬ್ ಪಂತ್ ಗೆ ಅವಕಾಶ ನೀಡಲು ಒತ್ತಾಯ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ