ಇಂದಿನಿಂದ ಎನ್ ಸಿಗೆ ರಾಹುಲ್ ದ್ರಾವಿಡ್ ಹೆಡ್ ಮಾಸ್ಟರ್

ಸೋಮವಾರ, 1 ಜುಲೈ 2019 (09:54 IST)
ಬೆಂಗಳೂರು: ವಾಲ್ ರಾಹುಲ್ ದ್ರಾವಿಡ್ ಇದುವರೆಗೆ ಭಾರತ ಎ ತಂಡದ ಕೋಚ್ ಆಗಿ ಹಲವು ಕ್ರಿಕೆಟಿಗರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕಾರಣರಾಗಿದ್ದರು. ಇದೀಗ ದ್ರಾವಿಡ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಚುಕ್ಕಾಣಿ ಹಿಡಿಯಲಿದ್ದಾರೆ.


ದ್ರಾವಿಡ್ ಇಂದಿನಿಂದ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ ದ್ರಾವಿಡ್ ರನ್ನು ಈಗಾಗಲೇ ಎ ತಂಡದ ಕೋಚ್ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಯುವಕರ ತಂಡಕ್ಕೆ ದ್ರಾವಿಡ್ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ.

ಎನ್ ಸಿಎ ಯುವ ಪ್ರತಿಭೆಗಳನ್ನು ಗುರುತಿಸುವ ತಾಣವಾಗಿದ್ದು, ಇಲ್ಲಿ ದ್ರಾವಿಡ್ ಗರಡಿಯಲ್ಲಿ ಪಳಗುವ ಯುವ ಕ್ರಿಕೆಟಿಗರು ಮುಂದೊಂದು ದಿನ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ