ಆರ್‌ಸಿಬಿ ಗೆಲುವು: ನೋಡ್ರೋ, ನಮ್ಮಕ್ಕ ಅದೃಷ್ಟ ಕಣ್ರೋ ಎಂದಾ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್‌

Sampriya

ಭಾನುವಾರ, 19 ಮೇ 2024 (12:29 IST)
photo Courtesy Instagram
ಬೆಂಗಳೂರು:  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್‌ಗೆ ಪ್ರವೇಶಿಸುವ ಮೂಲಕ ಆರ್‌ಸಿಬಿಯ ಹೊಸ ಅಧ್ಯಾಯ ಆರಂಭವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಟೂರ್ನಿಯ ಆರಂಭದಲ್ಲಿ ಆರ್‌ಸಿಬಿ ತಂಡ ಸತತ ಸೋಲಿನ ಮೂಲಕ  ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ವೇಳೆ ಆರ್‌ಸಿಬಿ ತಂಡದ ಸೋಲನ್ನು ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಅದಲ್ಲದೆ ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಕಾಲ್ಗುಣ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ದೂರಲಾಗಿತ್ತು.

ಇದೀಗ ಪ್ಲೇ ಆಫ್ ಪ್ರವೇಶಿಸಿದ ಗೆಲುವಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕಳಂಕದ ಮಾತನಾಡಿದವರಿಗೆ ಅಪ್ಪು ಫ್ಯಾನ್ಸ್‌ ಚಾಟಿ ಬೀಸುತ್ತಿದ್ದಾರೆ. ಅಶ್ವಿನಿ ಅದೃಷ್ಟ ಕಣ್ರೋ, ಅಪಶಕುನ ಅಲ್ಲ ಟ್ರೋಲ್ ಮಾಡುತ್ತಿದ್ದಾರೆ.

ಆರ್‌ಸಿಬಿ ರೋಚಕ ಜಯ ಸಾಧಿಸುತ್ತಿದ್ದ ಹಾಗೇ ನಿರೂಪಕ, ನಟ, ಬಿಗ್‌ಬಾಸ್‌ ಸ್ಪರ್ಧಿ ಕಿರಿಕ್‌ ಕೀರ್ತಿ ಈ ಬಗ್ಗೆ ಬರೆದುಕೊಂಡು "ನೋಡ್ರೋ... ನಮ್ಮಕ್ಕ ಅದೃಷ್ಟ ಕಣ್ರೋ.... ಅಪಶಕುನ ಅಲ್ಲ... " ಎಂದು ಪೋಸ್ಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು, "ಅಶ್ವಿನಿ ಪುನೀತ್ ರಾಜಕುಮಾರ್ ದೇವತೆ ಕಣ್ರೋ" "ದೊಡ್ಮನೆ ಸೊಸೆ ದೇವರಂತಹವರು" "ಏನ್ ಹೇಳ್ದೆ ಗುರು, ಮುಟ್ಟಿ ನೋಡ್ಕೊಳ್ಳೋ ಹಾಗೆ, ಇದು ಇದು actually ಚೆನ್ನಾಗಿರೋದು" "ಅಶ್ವಿನಿ ಪುನೀತ್ ರಾಜಕುಮಾರ್ ನಮ್ಮ ದೇವತೇ.. RCB ge ಅವರೇ kanro ಶುಭಶಕುನ" "ಅಶ್ವಿನಿ ಅಮ್ಮ ಅದೃಷ್ಟ ದೇವತೆ" ಎಂದು ಪ್ರತಿಕ್ರಿಯಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ