ಸೆಲ್ಫೀಗಾಗಿ ಪೀಡಿಸಿದ್ದಕ್ಕೆ ಅಭಿಮಾನಿಗಳ ವಿರುದ್ಧ ಗರಂ ಆದ ವಿರಾಟ್ ಕೊಹ್ಲಿ ಮಾಡಿದ್ದೇನು?

ಭಾನುವಾರ, 26 ಜೂನ್ 2022 (08:10 IST)
ಲೀಸೆಸ್ಟರ್: ಭಾರತ ಮತ್ತು ಲೀಸೆಸ್ಟರ್ ನಡುವಿನ ಅಭ್ಯಾಸ ಪಂದ್ಯದ ನಡುವೆ ಅಭಿಮಾನಿಗಳ ಗುಂಪೊಂದು ಭಾರತದ ಯುವ ವೇಗಿ ಕಮಲೇಶ್ ನಾಗರಕೋಟಿಗೆ ಸೆಲ್ಫೀಗಾಗಿ ಕಾಟ ಕೊಟ್ಟಿದೆ. ಇದಕ್ಕೆ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂದ್ಯದ ನಡುವೆ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಗರಕೋಟಿಗೆ ಪಕ್ಕದಲ್ಲಿದ್ದ ಅಭಿಮಾನಿಗಳ ಗುಂಪು ಸೆಲ್ಫೀಗಾಗಿ ಪೀಡಿಸುತ್ತಿತ್ತು. ಇದನ್ನು ನೋಡಿದ ಕೊಹ್ಲಿ ಬಾಲ್ಕನಿಯಿಂದಲೇ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಭಿಮಾನಿಯೊಬ್ಬ ಹಿಂದಿಯಲ್ಲಿ ಆಫೀಸ್ ಬಿಟ್ಟು ನಿಮ್ಮ ಜೊತೆ ಫೋಟೋ ತೆಗೆಯಲು ಬಂದಿದ್ದೇನೆ. ಎಷ್ಟು ಹೊತ್ತಿನಿಂದ ಕರೆಯುತ್ತಿದ್ದೇವೆ. ಕಿವಿಯೇ ಕೊಡುತ್ತಿಲ್ಲವಲ್ಲ ಎಂದು ಆಕ್ಷೇಪಿಸುತ್ತಿದ್ದರು. ಇದನ್ನು ಕೇಳಿಸಿಕೊಂಡ ಕೊಹ್ಲಿ ‘ಆತ ಇಲ್ಲಿ ಪಂದ್ಯ ಆಡಲು ಬಂದಿದ್ದಾನೆ. ಫೋಟೋ ತೆಗೆಯಲು ಅಲ್ಲ’ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ