ಅರುಣ್ ಜೇಟ್ಲಿ ನಿಧನದಿಂದ ಸೆಹ್ವಾಗ್ ಗೆ ಅಷ್ಟೊಂದು ದುಃಖವಾಗಿದ್ದೇಕೆ ಗೊತ್ತಾ?

ಭಾನುವಾರ, 25 ಆಗಸ್ಟ್ 2019 (09:05 IST)
ನವದೆಹಲಿ: ಮಾಜಿ ವಿತ್ತ ಸಚಿವ, ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ ನಿಧನರಾಗಿದ್ದಕ್ಕೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸರಣಿ ಟ್ವೀಟ್ ಮಾಡಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.


ಅಷ್ಟಕ್ಕೂ ಸೆಹ್ವಾಗ್ ಗೆ ಜೇಟ್ಲಿ ನಿಧನದಿಂದ ತೀವ್ರ ದುಃಖವಾಗಲು ಕಾರಣವೂ ಇದೆ. ಸೆಹ್ವಾಗ್ ಮತ್ತು ದೆಹಲಿ ಕ್ರಿಕೆಟಿಗರಿಗೆ ಅರುಣ್ ಜೇಟ್ಲಿ ಹಲವು ರೀತಿಯಲ್ಲಿ ಸಹಾಯ ಮಾಡಿದ್ದರಂತೆ. ಹಲವು ದೆಹಲಿ ಕ್ರಿಕೆಟಿಗರಿಗೆ ಮುಂದೆ ಬರಲು ಜೇಟ್ಲಿ ಸಹಾಯ ಮಾಡಿದ್ದರು ಎಂಬ  ಅಂಶವನ್ನು ಸೆಹ್ವಾಗ್ ಹೊರಹಾಕಿದ್ದಾರೆ.

ಅಷ್ಟೇ ಅಲ್ಲ, ಸೆಹ್ವಾಗ್ ತಮ್ಮ ಕ್ರಿಕೆಟ್ ಜೀವನದ ಉತ್ತುಂಗದಲ್ಲಿರುವಾಗ ಆರತಿ ಅವರನ್ನು ವಿವಾಹವಾಗಿದ್ದರು. ಆ ವಿವಾಹ ಸಮಾರಂಭವನ್ನು ಜೇಟ್ಲಿ ಭದ್ರಾತಾ ದೃಷ್ಟಿಯಿಂದ ತಮ್ಮ  ಅಧಿಕೃತ ನಿವಾಸದಲ್ಲೇ ಏರ್ಪಡಿಸಿದ್ದರು. ಹೀಗಾಗಿ ಸೆಹ್ವಾಗ್ ತಮಗೆ ವೈಯಕ್ತಿಕವಾಗಿಯೂ ಅವರ ನಿಧನ ತೀವ್ರ ದುಃಖ ತಂದಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ