ಪಂದ್ಯ ಬಿಟ್ಟು ಶಿಖರ್ ಧವನ್ ಮನೆಗೆ ಓಡಿದ್ದು ಯಾಕೆ? ಸೀಕ್ರೆಟ್ ಔಟ್!

ಶನಿವಾರ, 25 ನವೆಂಬರ್ 2017 (08:24 IST)
ನವದೆಹಲಿ: ಕ್ರಿಕೆಟಿಗ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ವೈಯಕ್ತಿಕ ಕಾರಣ ನೀಡಿ ಬಿಡುವು ಪಡೆದುಕೊಂಡಿದ್ದರು. ಪಂದ್ಯ ಅರ್ಧಕ್ಕೆ ಬಿಟ್ಟು ಮನೆಗೆ ಓಡುವ ಅರ್ಜೆಂಟ್ ಧವನ್ ಗೆ ಏನಿತ್ತು ಎನ್ನುವುದಕ್ಕೆ ಉತ್ತರ ಸಿಕ್ಕಿದೆ.
 

ಅಸಲಿಗೆ ಧವನ್ ಸಹೋದರಿ ಶ್ರೇಷ್ಠ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಧವನ್ ಕ್ರಿಕೆಟ್ ಸರಣಿ ಬಿಟ್ಟು ಮನೆಗೆ ಮರಳಿದ್ದಾರೆ.

ಧವನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಮದುಮಗಳ ವೇಷದಲ್ಲಿ ನಿಂತಿರುವ ಸಹೋದರಿ ಜತೆ ಫೋಟೋ ತೆಗೆಸಿಕೊಂಡಿದ್ದು, ಆಕೆಗೆ ಶುಭ ಹಾರೈಸಿದ್ದಾರೆ. ತಂಗಿ ಮದುವೆ ಅಂದ ಮೇಲೆ ಅಣ್ಣ ಹಾಜರಿರಲೇ ಬೇಕಲ್ವೇ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ