ತೃತೀಯ ಲಿಂಗಿಗಳಾದ ಸಂಜನಾ ಹಾಗೂ ಅರ್ಚನಾ ಮೆಜೆಸ್ಟಿಕ್ ಪ್ರದೇಶದಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಅಂಕಿತ್ ಕುಮಾರ್ ಖಾಸಗಿ ಆಸ್ಪತ್ರೆಯ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಾನೆ. ಮೆಜೆಸ್ಟಿಕ್ ಬಂದಿರುವ ಅಂಕಿತ್ ಕುಮಾರ್ಗೆ ಅಲ್ಲೇ ಇದ್ದ ಸಂಜನಾ ಹಾಗೂ ಅರ್ಚನಾ ಪರಿಚಯವಾಗಿದೆ. ಈ ವೇಳೆ ಏಕಾಂತದಲ್ಲಿ ಸಮಯ ಕಳೆಯಲು ಮೂವರು ಕಾಟನ್ ಪೇಟೆಯ ಲಾಡ್ಜ್ವೊಂದಕ್ಕೆ ತೆರಳಿದ್ದರು.
ಈ ವೇಳೆ ಹಣಕಾಸಿನ ವಿಚಾರವಾಗಿ ಮೂವರ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಅಂಕಿತ್ ಕುಮಾರ್ ಚಾಕುವಿನಿಂದ ಸಂಜನಾ ಮತ್ತು ಅರ್ಚನಾ ಕತ್ತು, ಹೊಟ್ಟೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಗಲಾಟೆ ವೇಳೆ ಸಂಜನಾ ಮತ್ತು ಅರ್ಚನಾ ಸಹ ಯಾವುದೋ ವಸ್ತುವಿನಿಂದ ಅಂಕಿತ್ ಕುಮಾರ್ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಲಾಡ್ಜ್ನ ಕೋಣೆಯಲ್ಲಿ ಚೀರಾಟದ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ರೂಮ್ ಬಾಯ್ ಓಡಿ ಹೋಗಿ ನೋಡಿದಾಗ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಲಾಡ್ಜ್ ಸಿಬ್ಬಂದಿ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ತೃತೀಯ ಲಿಂಗಿಗಳ ಸ್ನೇಹಿತೆ ಕಸ್ತೂರಿ ನೀಡಿದ ದೂರಿನ ಮೇರೆಗೆ ಕಾಟನ್ ಪೇಟೆ ಠಾಣೆ ಪೊಲೀಸರು, ಅಂಕಿತ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.