ಭ್ರಷ್ಟಾಚಾರ ಇರದ ಸರ್ಕಾರವೇ ಬಿಜೆಪಿ ಗುರಿಯಂತೆ!

ಭಾನುವಾರ, 14 ಏಪ್ರಿಲ್ 2019 (15:13 IST)
ಭ್ರಷ್ಟಾಚಾರ ಮತ್ತು ಜನರಿಗಾಗಿ 24 ಗಂಟೆ ದುಡಿಯುವ ಸರ್ಕಾರವೇ ನಮ್ಮ ಗುರಿ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ.  ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಜೊತೆ ಮನೆ ಮನೆ ಪ್ರಚಾರ ಕೈಗೊಂಡರು.

ಬೆಂಗಳೂರಿನ ಜೆಪಿ ನಗರದ ರಂಗ ಶಂಕರದ ಬಳಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದ ಮತ್ತೊಮ್ಮೆ ಮೋದಿಯವರ ಆಯ್ಕೆಗಾಗಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರವರನ್ನು ಬೆಂಬಲಿಸಬೇಕೆಂದರು. ಈ ವೇಳೆ ಸಾರ್ವಜನಿಕರ ಸ್ಪಂದನೆ ನೋಡಿ ಅಚ್ಚರಿಯಾದ ಸಚಿವೆ, ಜನರ ಸ್ಪಂದನೆಗೆ ಧನ್ಯವಾದ ತಿಳಿಸಿದರು.

ತೇಜಸ್ವಿ ಸೂರ್ಯ, ಬಿಜೆಪಿ ಮತ್ತು ಮತ್ತೊಮ್ಮೆ ಮೋದಿ ಸರ್ಕಾರಕ್ಕಾಗಿ ಅಭ್ಯರ್ಥಿಯ ಜೊತೆ ಮನೆ ಮನೆ ಪ್ರಚಾರ ಮಾಡುತ್ತಿರುವುದಾಗಿ ಹೇಳಿದರು. ಈಗ ದೇಶದಲ್ಲಿ ಉತ್ತಮ ಕೆಲಸಗಳಿಗಾಗಿ ವಿಶ್ವಾಸಾರ್ಹ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಅಸ್ಥಿತ್ವಕ್ಕೆ ಬರಬೇಕಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ