ಬಾಳೆಹಣ್ಣು ಸೇವಿಸುತ್ತಿದ್ದರೆ ಈ ರೋಗಗಳು ಹತ್ತಿರವೂ ಬರಲ್ಲ!

ಭಾನುವಾರ, 21 ಅಕ್ಟೋಬರ್ 2018 (09:50 IST)
ಬೆಂಗಳೂರು: ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಹಲವು ಲಾಭ ತಂದುಕೊಡುತ್ತವೆ. ಸುಲಭವಾಗಿ ಕೈಗೆಟುಕುವ ಈ ಹಣ್ಣು ಸೇವನೆಯಿಂದ ಹಲವು ರೋಗಗಳನ್ನು ದೂರ ಮಾಡಬಹುದು.
 

ಮಾನಸಿಕ ಒತ್ತಡ
ಆಧುನಿಕ ಜೀವನದಲ್ಲಿ ಎಲ್ಲರೂ ಮಾನಸಿಕ ಒತ್ತಡಕ್ಕೊಳಗಾಗುತ್ತಾರೆ. ಬಾಳೆಹಣ್ಣಿನಲ್ಲಿರವ ವಿಟಮಿನ್ ಬಿ6 ಅಂಶ ನಮ್ಮ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆ ತುಂಬಿ ಒತ್ತಡ, ಖಿನ್ನತೆ ದೂರ ಮಾಡಿ ಮಾನಸಿಕ ಆರೋಗ್ಯ ಕಾಪಾಡುತ್ತದೆ.

ರಕ್ತದೊತ್ತಡ
ಬಾಳೆಹಣ್ಣಿನಲ್ಲಿ ಪೊಟೇಷಿಯಂ ಅಂಶ ಬೇಕಾದಷ್ಟಿದ್ದು, ಇದನ್ನು ಸೇವಿಸುತ್ತಿದ್ದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಹೃದಯ ಬಡಿತ
ಹೃದಯ ಬಡಿತ ಏರುಪೇರಾಗಿದ್ದರೆ ಬಾಳೆಹಣ್ಣಿನಲ್ಲಿರುವ ಪೊಟೇಷಿಯಂ ಅಂಶ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ.

ಮಲಬದ್ಧತೆ
ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಚೆನ್ನಾಗಿ ಹಣ್ಣಾದ ಬಾಳೆ ಹಣ್ಣು ಸೇವನೆಯಿಂದ ಮಲಬದ್ಧತೆ ದೂರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ