ನೆಲ್ಲಿಕಾಯಿ ಬೀಜ ಬಳಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಸೋಮವಾರ, 31 ಮೇ 2021 (06:52 IST)
ಬೆಂಗಳೂರು :ಹಿಂದಿನ ಕಾಲದಿಂದಲೂ ನೆಲ್ಲಿಕಾಯಿಯನ್ನು ಔಷಧವಾಗಿ ಬಳಸುತ್ತಿದ್ದರು. ಆಯುರ್ವೇದದಲ್ಲಿ ಹಲವು ಕಾಯಿಲೆಗೆ ಇದರಿಂದ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ನೆಲ್ಲಿಕಾಯಿ ಬೀಜ ಕೂಡ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.

*ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ನೆಲ್ಲಿಕಾಯಿ ಬೀಜದ ಪುಡಿಯನ್ನು ತುಪ್ಪದಲ್ಲಿ ಹುರಿದು ಮೂಗು ಮತ್ತು ಹಣೆಯ ಮೇಲೆ ಹಚ್ಚಿ. ಇದು ‍ಶೀಫ್ರದಲ್ಲಿಯೇ ಪರಿಹಾರ ನೀಡುತ್ತದೆ.

*ಚರ್ಮದ ಮೇಲೆ ದದ್ದುಗಳು, ಅಲರ್ಜಿಯಾಗಿದ್ದರೆ  ಅದನ್ನು ನಿವಾರಿಸಲು ನೆಲ್ಲಿಕಾಯಿ ಬೀಜಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಕಜ್ಜಿ ಇರುವ ಕಡೆ ಹಚ್ಚಿ.

*ವಾಂತಿ, ವಾಕರಿಕೆ ಸಮಸ್ಯೆ ಇದ್ದರೆ ನೆಲ್ಲಿಕಾತಿ ಬೀಜಗಳ ಪುಡಿಯನ್ನು ಶ್ರೀಗಂಧ, ಜೇನುತುಪ್ಪದೊಂದಿಗೆ ಸೇವಿಸಿದರೆ ವಾಂತಿ, ವಾಕರಿಕೆ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ