ಸರಕಾರದ ಮಾನ ಉಳಿದಿಲ್ಲ ಎಂದ ಕುಮಾರಸ್ವಾಮಿ

ಭಾನುವಾರ, 26 ಏಪ್ರಿಲ್ 2020 (22:05 IST)
ರಾಮನಗರ ಜೈಲಿನಿಂದ ಬೆಂಗಳೂರಿಗೆ ಕೈದಿಗಳನ್ನು ಈ ಮೊದಲೇ ರವಾನೆ ಮಾಡಿದ್ದರೆ ಆಗ ಸರಕಾರದ ಮರ್ಯಾದೆ ಉಳಿಯುತ್ತಿತ್ತು.

ಹೀಗಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಬೆಂಗಳೂರಿಗೆ ರಾಮನಗರದ ಕೈದಿಗಳನ್ನು ಸ್ಥಳಾಂತರಿಸಿ ಆ ಬಳಿಕ ಉಲ್ಟಾ ಮಾಡಿದ್ದೇಕೆ ಅಂತ ಪ್ರಶ್ನೆ ಮಾಡಿದ್ದಾರೆ.

ಸಚಿವ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ವಿರುದ್ಧ ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುತ್ತಿದ್ದು, ಅದನ್ನು ಬಿಡಬೇಕು. ರಾಮನಗರ ಜೈಲಿಗೆ ಪಾದರಾಯನಪುರ ಆರೋಪಿಗಳನ್ನು ಹಾಕಿ ಎಡಬಿಡಂಗಿತನ ಮಾಡಿದ್ದು ಬಿಜೆಪಿ ಸರಕಾರ ಎಂದು ಜರಿದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ