ಹೇಳಿದ ಮಾತು ಪಾಕ್ ಕೇಳಲಿಲ್ಲ, ಅದಕ್ಕೇ ದಾಳಿ ಮಾಡಿದೆವು: ಚೀನಾ ಬಳಿ ಪಾಕ್ ಗೆ ದೂರು

ಬುಧವಾರ, 27 ಫೆಬ್ರವರಿ 2019 (10:11 IST)
ಬೀಜಿಂಗ್: ಚೀನಾ ಪ್ರವಾಸ ತೆರಳಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತೀಯ ವಾಯುಸೇನೆ ಬಾಲ್ ಕೋಟ್ ನಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.


ಚೀನಾ ಪಾಕಿಸ್ತಾನಕ್ಕೆ ತೆರೆ ಮರೆಯಲ್ಲಿ ಬೆಂಬಲಿಸುತ್ತದೆ ಎಂಬ ಅಪವಾದವಿದೆ. ಇದೇ ಸಂದರ್ಭದಲ್ಲಿ ಚೀನಾಕ್ಕೆ ತೆರಳಿರುವ ಸುಷ್ಮಾ ಸ್ವರಾಜ್, ಪಾಕ್ ಮಿತ್ರ ರಾಷ್ಟ್ರದ ಎದುರಿಗೇ ಆ ರಾಷ್ಟ್ರಕ್ಕೆ ತಪರಾಕಿ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಜೈಶೆ ಉಗ್ರರು ಮತ್ತೊಂದು ದಾಳಿಗೆ ಹೊಂಚು ಹಾಕಿದ್ದರು.  ಹೀಗಾಗಿ ನಮ್ಮ ರಕ್ಷಣೆ ಮಾಡಲು ದಾಳಿ ಮಾಡಿದೆವು ಎಂದು ಸುಷ್ಮಾ ಚೀನಾಕ್ಕೆ ಮನವರಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ