ಮನೀಶ್ ಪಾಂಡೆ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದು ಇದೇ ಕಾರಣಕ್ಕೆ!

ಶುಕ್ರವಾರ, 16 ಏಪ್ರಿಲ್ 2021 (09:28 IST)
ಮುಂಬೈ: ಐಪಿಎಲ್ 14 ರ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿ ಖಳನಾಗಿರುವ ಕನ್ನಡಿಗ ಮನೀಶ್ ಪಾಂಡೆ ಬಗ್ಗೆ ಮಾಜಿ ವೇಗಿ ಆಶಿಷ್ ನೆಹ್ರಾ ಟೀಕಾ ಪ್ರಹಾರ ನಡೆಸಿದ್ದಾರೆ.


ಮನೀಶ್ ಪಾಂಡೆಗೆ ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ. ಅವರು ಟೀಂ ಇಂಡಿಯಾದಿಂದ ಹೊರಗೆ-ಒಳಗೆ ಎನ್ನುವ ಪರಿಸ್ಥಿತಿಗೆ ಬರಲು ಅವರು ಸಮಯ, ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡದೇ ಇರುವುದು ಕಾರಣ ಎಂದು ನೆಹ್ರಾ ಟೀಕಿಸಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಮನೀಶ್ ಪಾಂಡೆ ಬಗ್ಗೆ ಈ ಮೊದಲು ಟೀಕೆ ಮಾಡಿದ್ದರು. ಪಾಂಡೆಯಂತಹ ಒಬ್ಬ ಕ್ರಿಕೆಟಿಗ ಇದ್ದರೆ ಸಾಕು ತಂಡದ ಶ್ರಮ ವ್ಯರ್ಥ ಮಾಡಲು ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ