ಧೋನಿಯನ್ನು ಉಳಿಸಿಕೊಳ್ಳುವುದೇ ನಮ್ಮ ಗುರಿ: ಸಿಎಸ್ ಕೆ

ಸೋಮವಾರ, 18 ಅಕ್ಟೋಬರ್ 2021 (09:10 IST)
ಚೆನ್ನೈ: ಮುಂದಿನ ಐಪಿಎಲ್ ಗೆ ಮೊದಲು ಬಿಸಿಸಿಐ ಎರಡು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲಿದ್ದು, ಅದಕ್ಕಾಗಿ ಈ ಬಾರಿ ಮೆಗಾ ಆಕ್ಷನ್ ನಡೆಸಲು ಸಿದ್ಧತೆ ನಡೆಸಿದೆ.


ಹರಾಜು ನಡೆದರೆ ಹಲವು ಆಟಗಾರರು ತಮ್ಮ ಈಗಿನ ಫ‍್ರಾಂಚೈಸಿ ಬಿಟ್ಟು ಬೇರೆ ಫ್ರಾಂಚೈಸಿ ಸೇರಿಕೊಳ್ಳಬೇಕಾಗುತ್ತದೆ. ಹೀಗಾಗಿ ಚಾಂಪಿಯನ್ ನಾಯಕ ಧೋನಿ ಬೇರೆ ತಂಡದ ಪಾಲಾದರೆ ಎಂಬ ಆತಂಕ ಚೆನ್ನೈ ತಂಡದ್ದು.

ಹೀಗಾಗಿ ಈ ಬಗ್ಗೆ ಪ್ರಶ್ನಿಸಿದಾಗ ಚೆನ್ನೈ ಫ್ರಾಂಚೈಸಿ ಮೂಲಗಳು ಮುಂದಿನ ಹರಾಜಿನಲ್ಲಿ ಕೆಲವು ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದರೆ ಧೋನಿಯನ್ನು ಉಳಿಸಿಕೊಳ್ಳುವುದು ನಮ್ಮ ಗುರಿಯಾಗಲಿದೆ ಎಂದಿದ್ದಾರೆ. ಧೋನಿ ಕೂಡಾ ಇತ್ತೀಚೆಗೆ ಮುಂದಿನ ವರ್ಷ ಯಾವ ತಂಡದ ಪರ ಆಡಲಿದ್ದೇನೆ ಎನ್ನುವುದು ಬಿಸಿಸಿಐ ಮೇಲೆ ಅವಲಂಬಿತವಾಗಿದೆ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ