ವಿರಾಟ್ ಕೊಹ್ಲಿ ಮನದಿಂಗಿತ ತೀರಿಸಲು ಮುಂದಾದ ಜಸ್ಪ್ರೀತ್ ಬುಮ್ರಾ

ಬುಧವಾರ, 2 ಜನವರಿ 2019 (09:24 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಾಯಕ ಹೇಳಿದಂತೆ ಕೇಳುವ ವಿಧೇಯ ಆಟಗಾರ ಎನ್ನುವದನ್ನು ನಿರೂಪಿಸಲು ಹೊರಟಿದ್ದಾರೆ.


ಈ ವರ್ಷ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಕೂಟದ ದೃಷ್ಟಿಯಿಂದ ಪ್ರಮುಖ ವೇಗಿಗಳು ಐಪಿಎಲ್ ನಿಂದ ಹೊರಗುಳಿಯುವುದು ಉತ್ತಮ ಎಂದು ಕೊಹ್ಲಿ ಇತ್ತೀಚೆಗೆ ಹೇಳಿದ್ದರು. ಅದನ್ನೀಗ ಬುಮ್ರಾ ಪಾಲಿಸಲು ಹೊರಟಿದ್ದಾರೆ.

ತಮ್ಮ ಫ್ರಾಂಚೈಸಿಗಳ ಜತೆ ಮಾತನಾಡಿ ವಿಶ್ವಕಪ್ ಗೆ ವಿಶ್ರಾಂತಿ ಪಡೆಯಲು ಐಪಿಎಲ್ ನಲ್ಲಿ ಆಡದೇ ಇರಲು ಬುಮ್ರಾ ಚಿಂತನೆ ನಡೆಸಿದ್ದಾರೆ.ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಆಡುವ ಬುಮ್ರಾ ವಿಶ್ವಕಪ್ ಸಂದರ್ಭದಲ್ಲಿ ವಿಪರೀತ ಕೆಲಸದೊತ್ತಡದಿಂದ ಗಾಯವಾಗದಂತೆ ತಮ್ಮ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಲು ಈ ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ