ವಿವಾದಾತ್ಮಕ ತೀರ್ಪಿಗೆ ಬಲಿಯಾದ ರೋಹಿತ್ ಶರ್ಮಾ ಮೈದಾನದಲ್ಲೇ ಅಸಮಾಧಾನ

ಮಂಗಳವಾರ, 10 ಮೇ 2022 (10:10 IST)
ಮುಂಬೈ: ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು.

ಬಾಲ್ ರೋಹಿತ್ ಬ್ಯಾಟ್ ಸನಿಹವೇ ಸಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಫೀಲ್ಡ್ ಅಂಪಾಯರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ವಿಕೆಟ್ ಕೀಪರ್ ಸಲಹೆಯಂತೆ ಶ್ರೇಯಸ್ ಅಯ್ಯರ್ ರಿವ್ಯೂ ತೆಗೆದುಕೊಂಡರು.

ರಿವ್ಯೂನಲ್ಲಿ ಬ್ಯಾಟ್ ಗೆ ಬಾಲ್ ತಾಕಿರಲಿಲ್ಲ. ಆದರೆ ಆಲ್ಟ್ರಾ ಎಡ್ಜ್ ನಲ್ಲಿ ಚೆಂಡು ತಗುಲಿದಂತೆ ಗೆರೆಗಳು ಮೂಡಿತ್ತು. ಇದರಿಂದಾಗಿ ಥರ್ಡ್ ಅಂಪಾಯರ್ ಔಟ್ ತೀರ್ಪು ನೀಡಿದರು. ಇದರಿಂದ ಅಸಮಾಧಾನದಿಂದಲೇ ರೋಹಿತ್ ಶರ್ಮಾ ಮೈದಾನದಿಂದ ತೆರಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ