ಆದಾಯ ತೆರಿಗೆ ಸಲ್ಲಿಕೆ ಮಾಡುವ ಮೊದಲು ಈ ಹೊಸ ನಿಯಮ ತಿಳಿದುಕೊಳ್ಳಿ

Krishnaveni K

ಶನಿವಾರ, 28 ಜೂನ್ 2025 (09:44 IST)
ಬೆಂಗಳೂರು: ಇನ್ನೇನು ಈ ಆರ್ಥಿಕ  ವರ್ಷದ ಆದಾಯ ತೆರಿಗೆ ಸಲ್ಲಿಕೆ ಮಾಡುವ ದಿನ ಬಂದಿದ್ದು, ಹೊಸ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
 

ಆದಾಯ ತೆರಿಗೆ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡುವುದನ್ನು ತಪ್ಪಿಸಲು ಹೊಸ ನಿಯಮವನ್ನು ಈ ಬಾರಿಯಿಂದ ಜಾರಿಗೆ ತರಲಾಗುತ್ತಿದೆ. ಇನ್ನು ತೆರಿಗೆ ವಂಚನೆ ಮಾಡಿದರೆ ಅಂತಹವರಿಗೆ ಕಠಿಣ ಶಿಕ್ಷೆ ಸಿಗಲಿದೆ ಎಂದು ಆದಾಯ ತೆರಿಗೆ ವಿಭಾಗ ಎಚ್ಚರಿಕೆ ನೀಡಿದೆ.

ಆದಾಯ ತೆರಿಗೆ ಪಾವತಿಸುವವರು ಸುಳ್ಳು ಮಾಹಿತಿ ನೀಡಿದರೆ ಅಥವಾ ಸುಳ್ಳು ಕಾಗದ ಪತ್ರಗಳನ್ನು ನೀಡಿ ತೆರಿಗೆ ವಂಚಿಸಲು ಮುಂದಾದರೆ ಶೇ.200 ರಷ್ಟು ದಂಡ ಹಾಗೂ ವಾರ್ಷಿಕ ಶೇ.24 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ವಂಚನೆಯ ಪ್ರಮಾಣಕ್ಕೆ ತಕ್ಕಂತೆ ಸೆಕ್ಷನ್ 276 ಸಿ ಪ್ರಕಾರ ಜೈಲು ಶಿಕ್ಷೆಯೂ ಆಗಬಹುದು.

ಹೀಗಾಗಿ ಇನ್ನು ಮುಂದೆ ತೆರಿಗೆದಾರರು ಸಣ್ಣ ತಪ್ಪು ಮಾಡಿದರೆ ಅದಕ್ಕೆ ದೊಡ್ಡ ದಂಢ ವಿಧಿಸಬೇಕಾದೀತು. ನಿಮ್ಮ ಲೆಕ್ಕ ಪರಿಶೋಧಕರು ತಪ್ಪು ಮಾಡಿದರೂ ಅದಕ್ಕೆ ನೀವೇ ಹೊಣೆಗಾರರಾಗಿರುತ್ತೀರಿ. ಹೀಗಾಗಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ