ಮಂಚಕ್ಕೆ ಕರೆದ ನಿರ್ದೇಶಕನ ವಿರುದ್ಧ ಠಾಣೆ ಮೆಟ್ಟಿಲೇರಿದ ನಟಿ ಅಮೂಲ್ಯ ಗೌಡ

Sampriya

ಸೋಮವಾರ, 6 ಮೇ 2024 (19:24 IST)
Photo Courtesy X
ಬೆಂಗಳೂರು: ಸಿನಿಮಾ ಅವಕಾಶ ಸಿಗಬೇಕಾದರೆ ಮಂಚಕ್ಕೆ ಬಾ ಎಂದು ಅಶ್ಲೀಲವಾಗಿ ಮೆಸೇಜ್ ಕಳುಹಿಸಿರುವುದಾಗಿ ನಿರ್ದೇಶಕ ಸೂರ್ಯ ಎಂಬಾತನ ವಿರುದ್ಧ ನಟಿ ಅಮೂಲ್ಯ ಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯಗೌಡ ಅವರು ಪೊಲೀಸರಿಗೆ ದೂರು ನೀಡಿದ್ದು,  ದೂರಿನ ಅನ್ವಯನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ನಟಿ ಅಮೂಲ್ಯಗೌಡ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಮಂಚಕ್ಕೆ ಬಾ ಎಂಬುದಾಗಿ ನಿರ್ದೇಶಕ ಸೂರ್ಯ ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂದು ಎನ್ನಲಾಗುತ್ತಿದ್ದು, ಇದಕ್ಕೆ ಸಿಟ್ಟಾದ ನಟಿ ಅಮೂಲ್ಯಗೌಡ ಏಪ್ರಿಲ್.30ರಂದು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ತೆರಳಿ ನಿರ್ದೇಶಕ ಸೂರ್ಯ ವಿರುದ್ಧ ದೂರು ನೀಡಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಇಂದು ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ