ಚಾಮುಂಡಿ ಅನುಗ್ರಹದಿಂದ ಅಣ್ಣನಿಗೆ ಒಳ್ಳೆಯದಾಗುತ್ತದೆ: ಧನ್ವೀರ್

Sampriya

ಗುರುವಾರ, 11 ಜುಲೈ 2024 (17:56 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್ ಅವರನ್ನು ಅವರ ಆಪ್ತ ಸ್ನೇಹಿತ, ನಟ ಧನ್ವೀರ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ದರ್ಶನ್ ಅವರನ್ನು ಈಚೆಗೆ ರಕ್ಷಿತಾ ಪ್ರೇಮ್, ನಟ ವಿನೋದ್ ಪ್ರಭಾಕರ್ ಅವರು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಧನ್ವೀರ್ ಅವರು ದರ್ಶನ್‌ ಭೇಟಿಗೆ ಹೋಗಿದ್ದರು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಧನ್ವೀರ್ ಅವರು ದರ್ರಶನ್ ಅವರನ್ನು ಭೇಟಿಯಾಗಿ ಅವರ ಜತೆ ಕೆಲಹೊತ್ತು ಮಾತನಾಡಿದ್ದಾರೆ.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಧನ್ವೀರ್ ಅವರು, ದರ್ಶನ್ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಬಾರದು. ದರ್ಶನ್ ಅವರನ್ನು ನಾನು ಯಾವಾಗಲು ಅಣ್ಣ ಅಂತಾನೇ ಕರೆಯುತ್ತೇನೆ. ಕೆಲ ಮಾಧ್ಯಮಗಳಲ್ಲಿ ನಾವು ಈ ಸಂಬಂಧ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ನಾವು ಏನನ್ನೂ ಹೇಳಲು ಆಗುವುದಿಲ್ಲ ಎಂದರು.

ಚಾಮುಂಡೇಶ್ವರಿ ಆಶೀರ್ವಾದಿಂದ ಅಣ್ಣನಿಗೆ ಎಲ್ಲವೂ ಒಳ್ಳೆಯದಾಗಲಿದೆ. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ತಪ್ಪು ನಡೆದಿದ್ರೆ ಶಿಕ್ಷೆ ಆಗಿಯೇ ಆಗುತ್ತದೆ.  ನನ್ನಲ್ಲಿ ಸಿನಿಮಾದ ಕಡೆ ಗಮನಹರಿಸು. ಅಭಿಮಾನಿಗಳಿಗೆ ಧೈರ್ಯ ಹೇಳು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ