Darshan: ದರ್ಶನ್ ಗೆ ವಿದೇಶಕ್ಕೆ ಹೋಗಲೂ ಅನುಮತಿ ಸಿಕ್ತು, ಇನ್ನೇನು ಬೇಕು
ಚಿತ್ರದುರ್ಗದ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ 17 ಆರೋಪಿಗಳಲ್ಲಿ ದರ್ಶನ್ ಎ2 ಆರೋಪಿ. ಎಲ್ಲಾ ಆರೋಪಿಗಳೂ ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ.
ನಟ ದರ್ಶನ್ ಈಗ ಡೆವಿಲ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ ಅನುಮತಿ ಪಡೆದು ರಾಜಸ್ಥಾನ್ ಗೆ ಶೂಟಿಂಗ್ ಗೆ ಹೋಗಿಬಂದಿದ್ದರು. ಇದೀಗ ಡೆವಿಲ್ ಶೂಟಿಂಗ್ ಗಾಗಿ 25 ದಿನಗಳಿಗೆ ವಿದೇಶಕ್ಕೆ ತೆರಳಲು ಅನುಮತಿ ಕೋರಿದ್ದರು. ಅದರಂತೆ ಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿದೆ.
ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ದರ್ಶನ್ ಕಾಲೆಳೆದಿದ್ದಾರೆ. ವಿದೇಶಕ್ಕೆ ಹೋಗಲೂ ಅನುಮತಿ ಸಿಕ್ಕಾಯ್ತು. ಇನ್ನೇನು, ಕೆಲವು ದಿನ ಆದ ಬಳಿಕ ಕೇಸ್ ನ್ನೇ ಮರೆತು ಬಿಡುತ್ತಾರೆ. ಕೇಸ್ ಕೂಡಾ ಹಳ್ಳ ಹಿಡಿಯುತ್ತದೆ ಎಂದು ಕಿಡಿ ಕಾರಿದ್ದಾರೆ.