ಕಿಚ್ಚ ಸುದೀಪ್ ಗೆ ಅಭಿನವ ಭಾರ್ಗವ ವಿಷ್ಣುವರ್ಧನ ಪ್ರಶಸ್ತಿ

ಶನಿವಾರ, 5 ಸೆಪ್ಟಂಬರ್ 2020 (09:28 IST)
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2020 ನೇ ಸಾಲಿನ ಅಭಿನವ ಭಾರ್ಗವ ವಿಷ್ಣುವರ್ಧನ ಪ್ರಶಸ್ತಿಗೆ ನಟ ಕಿಚ್ಚ ಸುದೀಪ್ ಭಾಜನರಾಗಿದ್ದಾರೆ.


ಕನ್ನಡ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ಕೊಡುಗೆ, ಅಭಿನಯ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಫಲಕ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯ ಸಮಿತಿ ಈ ಪ್ರಶಸ್ತಿಗೆ ಸುದೀಪ್ ಹೆಸರನ್ನು ಆಯ್ಕೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ