ರಾಗಿಣಿ ಪ್ರಕರಣದಲ್ಲಿ ನಾನೂ ಆರೋಪಿ ಎಂದು ಶರಣಾದ ಯುವಕ

ಭಾನುವಾರ, 6 ಸೆಪ್ಟಂಬರ್ 2020 (09:42 IST)
ಬೆಂಗಳೂರು: ಮಾದಕ ದ್ರವ್ಯ ಮಾಫಿಯಾ ಪ್ರಕರಣದಲ್ಲಿ ರಾಗಿಣಿ ಜೊತೆ ನಾನೂ ಆರೋಪಿ ಎಂದು ಯುವಕನೊಬ್ಬ ಸಿಸಿಬಿ ಕಚೇರಿಗೆ ಖುದ್ದಾಗಿ ಬಂದು ಬಂಧಿತನಾದ ಘಟನೆ ನಡೆದಿದೆ.

 

ಅನಿರುದ್ಧ್ ಎಂಬ ಯುವಕ ಬೈಕ್ ನಲ್ಲಿ ಬಂದು ಸಿಸಿಬಿ ಕಚೇರಿ ಮುಂದೆ ಹೈಡ್ರಾಮಾ ಮಾಡಿದ್ದಾನೆ. ರಾಗಿಣಿ ಜತೆ ಫೋಟೋದಲ್ಲಿರುವ ವ್ಯಕ್ತಿ ನಾನೇ. ನಾನು ಆರೋಪಿ ನಂ.13. ನನ್ನನ್ನೂ ಬಂಧಿಸಿ ಎಂದು ಆತ ಹೇಳಿದ್ದಾನೆ. ಈತನ ಮನವಿಗೆ ಸ್ವತಃ ಸಿಸಿಬಿ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ. ಬಳಿಕ ಆತನನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ