ವೈವಾಹಿಕ ಜೀವನ ಮುರಿದು ಬಿದ್ದ ಮೇಲೆ ನಾಗಚೈತನ್ಯ ದುರಾದೃಷ್ಟ ಶುರುವಾಯ್ತಾ?!

ಮಂಗಳವಾರ, 26 ಜುಲೈ 2022 (09:30 IST)
ಹೈದರಾಬಾದ್: ಯಾಕೋ ಸಮಂತಾ ಋತು ಪ್ರಭು ಜೊತೆಗೆ ವೈವಾಹಿಕ ಜೀವನ ಮುರಿದು ಬಿದ್ದ ಮೇಲೆ ನಾಗಚೈತನ್ಯ ವೃತ್ತಿ ಜೀವನಕ್ಕೂ ದುರಾದೃಷ್ಟ ಶುರುವಾಗಿದೆಯಾ?

ನಾಗಚೈತನ್ಯ ನಾಯಕರಾಗಿರುವ ಥ್ಯಾಂಕ್ಯೂ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಬಾಕ್‍ ಆಫೀಸ್ ನಲ್ಲಿ ಇನ್ನಿಲ್ಲದಂತೆ ಸೋಲು ಕಂಡಿದೆ.

ಮೊದಲ ವಾರಂತ್ಯದಲ್ಲಿ ಸಿನಿಮಾ ಗಳಿಸಿದ್ದು ಕೇವಲ 3 ಕೋಟಿ ರೂ. ಇದುವರೆಗೆ ನಾಗಚೈತನ್ಯ ಸಿನಿಮಾ ಇಷ್ಟೊಂದು ಕಳಪೆ ಗಳಿಕೆ ಮಾಡಿದ್ದು ಇದೇ ಮೊದಲು. ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವುದು ಖಂಡಿತಾ. ಹೀಗೇ ಮುಂದುವರಿದರೆ ಮೆಗಾಸ್ಟಾರ್ ಚಿರಂಜೀವಿಯವರ ಆಚಾರ್ಯ ಸಿನಿಮಾದಂತೆ ಶೀಘ್ರದಲ್ಲೇ ಒಟಿಟಿಗೆ ಬರುವುದು ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ