ಅಪ್ಪು ಫೋಟೋ ಹಿಡಿದು ಕೆಂಡ ಹಾಯ್ದ ಅಭಿಮಾನಿ

ಸೋಮವಾರ, 4 ಏಪ್ರಿಲ್ 2022 (10:20 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಷ್ಟು ದಿನವಾದರೂ ಅವರ ಅಭಿಮಾನಿಗಳ ದುಃಖ ಮರೆಯಾಗಿಲ್ಲ.

ಅಪ್ಪು ಮೇಲಿನ ಅಭಿಮಾನದಿಂದ ಹೊಸಪೇಟೆ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ಮಹೋತ್ಸವದಲ್ಲಿ ಅಭಿಮಾನಿಯೊಬ್ಬರು ಅಪ್ಪು ಫೋಟೋ ಹಿಡಿದು ಕೆಂಡ ತುಳಿಯುವ ಸೇವೆ ಮಾಡಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೋರ್ವ ತನ್ನ ಅಕ್ಕನ ಆಸೆಯಂತೆ ಪುನೀತ್ ಫೋಟೋ ಹಿಡಿದು ಕೆಂಡ ತುಳಿದು ಅಭಿಮಾನ ಮೆರೆದಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ