ಅಡ್ಡ ದಾರೀಲಿ ನಡೆಯುವವರು ಸೈಡಲ್ಲಿ ಉಳೀತಾರೆ: ರಾಕಿಂಗ್ ಸ್ಟಾರ್ ಯಶ್

ಭಾನುವಾರ, 13 ಡಿಸೆಂಬರ್ 2020 (10:01 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ರನ್ನು ಅವಹೇಳನ ಮಾಡಿ ಮಾತನಾಡಿದ ತೆಲುಗು ನಟ ವಿಜಯ ರಂಗರಾಜು ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಸಿಡಿದೆದ್ದಿದ್ದಾರೆ.


ಸ್ಯಾಂಡಲ್ ವುಡ್ ಕಲಾವಿದರ ಜತೆ ಈ ವಿವಾದಕ್ಕೆ ಧ್ವನಿಗೂಡಿಸಿರುವ ಯಶ್ ‘ಸರಿದಾರಿಯಲ್ಲಿ ನಡೆಯುವವರು ಬೆವರು ಹರಿಸಿ ಹಂತ ಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ. ಅಡ್ಡ ದಾರಿಯಲ್ಲಿ ನಡೆಯುವವರು ಅಂತಹವರ ಹೆಸರು ಬಳಸಿ ನಿಂದಿಸಲು ಹೋಗಿ ಸೈಡಲ್ಲಿ ಉಳಿದುಕೊಳ್ಳುತ್ತಾರೆ. ‘ವಿಷ್ಣು ಸರ್’ ಕನ್ನಡ ನಾಡು ಕಂಡ ಮಹಾನ್ ಸಾಧಕರು. ಅವರ ಪ್ರತಿಭೆ, ಶ್ರಮ ಹಾಗೂ ನಟನೆಯ ಜೊತೆಜೊತೆಯಾಗಿ ಅವರ ಬದುಕು ಅವರ ವ್ಯಕ್ತಿತ್ವದಿಂದ ನಮ್ಮ ಮನದಲ್ಲಿ ಅಜರಾಮರಾಗಿ ಉಳಿದವರು. ಅಂತ ಸಾಧಕರನ್ನು ನಿಂದಿಸಿ ಹೆಸರು ಮಾಡಬಯಸುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಕನ್ನಡ ಚಿತ್ರರಂಗ ಎಲ್ಲಾ ಚಿತ್ರರಂಗಗಳ ಜತೆ ಪರಸ್ಪರ ಹೊಂದಾಣಿಕೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಅದು ಇಂತವರಿಂದ ತಪ್ಪು ದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು’ ಎಂದು ಯಶ್ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ