ಮನೆದೇವ್ರು ಶ್ರೀಕಂಠೇಶ್ವರನ ದರ್ಶನ ಪಡೆದ ರಾಕಿ ಭಾಯಿ ಯಶ್ ದಂಪತಿ

ಬುಧವಾರ, 21 ಜೂನ್ 2023 (15:55 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳು ಇಂದು ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ದೇವರ ದರ್ಶನದ ಬಳಿಕ ಮಾತನಾಡಿದ ಯಶ್ ‘ಶ್ರೀಕಂಠೇಶ್ವರ ನಮ್ಮ ಮನೆದೇವರು. ಆಗಾಗ ಬರ್ತಾ ಇರ್ತೀವಿ. ಕೊರೋನಾದಿಂದಾಗಿ ಕೆಲವು ಸಮಯದಿಂದ ಬರೋದಿಕ್ಕೆ ಆಗಿರಲಿಲ್ಲ. ಹಾಗಾಗಿ ಈಗ ಬಂದಿದ್ದೇವೆ ಅಷ್ಟೇ’ ಎಂದಿದ್ದಾರೆ.

ಈ ವೇಳೆ ಯಶ್ ರನ್ನು ನೋಡಲು, ಸೆಲ್ಫೀಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು. ಪತ್ನಿ, ಮಕ್ಕಳಾದ ಐರಾ, ಯಥರ್ವ್ ಜೊತೆ ಪೂಜೆ, ಪ್ರಸಾದ ಸ್ವೀಕರಿಸಿದ ಬಳಿಕ ಜನರತ್ತ ಕೈ ಬೀಸಿದ ಯಶ್ ಅಲ್ಲಿಂದ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ