ನಾವು ಕನ್ನಡಿಗರು ಎಸ್ ಪಿಬಿ ಅಂತಿಮ ಯಾತ್ರೆಗೆ ಹೆಗಲುಕೊಡಬೇಕಿತ್ತು: ರವಿಚಂದ್ರನ್ ಅಳಲು

ಶನಿವಾರ, 26 ಸೆಪ್ಟಂಬರ್ 2020 (09:23 IST)
ಬೆಂಗಳೂರು: ಎಸ್ ಪಿ ಬಾಲಸುಬ್ರಮಣ್ಯಂ ಯಾವುದೇ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಅಭಿಮಾನದಿಂದಲೇ ಮಾತನಾಡುತ್ತಿದ್ದರು. ಮುಂದೊಂದು ಜನ್ಮವಿದ್ದರೆ ಇಲ್ಲಿಯೇ ಹುಟ್ಟಿ ಬರುವೆ ಎನ್ನುತ್ತಿದ್ದರು. ಆದರೆ ಈಗ ಅವರ ಅಂತಿಮ ದರ್ಶನಕ್ಕೂ ಹೋಗಲಾಗುತ್ತಿಲ್ಲ ಎಂಬ ನೋವು ಅವರ ಜತೆ ಕೆಲಸ ಮಾಡಿದ ಸ್ಯಾಂಡಲ್ ವುಡ್ ನ ದಿಗ್ಗಜರಲ್ಲಿದೆ.

 

ಸಂಗೀತ ನಿರ್ದೇಶಕ ಹಂಸಲೇಖ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಅನೇಕರು ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದ ಬೇಸರ ಹೊರ ಹಾಕಿದ್ದಾರೆ. ಎಸ್ ಪಿಬಿ ನೋಡಲು ಹೋಗಲಾಗ್ತಿಲ್ಲ. ನಾವೆಲ್ಲಾ ಹೀರೋಗಳು ಅವರನ್ನು ತೋಳಿನಲ್ಲಿ ಹೊತ್ಕೊಂಡು ಹೋಗಿ ಸಮಾಧಿ ಮಾಡಬೇಕಿತ್ತು. ಆದರೆ ಆಗ್ತಿಲ್ಲ ಎಂದು ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ ಅವರ ಜತೆ ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಹಂಸಲೇಖ ಕೂಡಾ ಕೊನೆಯ ಗಳಿಗೆಯಲ್ಲಿ ಅವರ ಮುಖ ನೋಡಲಾಗದ ಸ್ಥಿತಿಯಲ್ಲಿ ನಾವಿದ್ದೇವಲ್ಲಾ ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ