ಕಿಚ್ಚ ಸುದೀಪ್ ವಿರುದ್ಧ ಸಿಎಂ, ಫಿಲಂ ಚೇಂಬರ್ ಗೆ ದೂರು

ಬುಧವಾರ, 1 ಆಗಸ್ಟ್ 2018 (09:49 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರಸ್ದಾರ ಧಾರವಾಹಿಯ ಚಿತ್ರೀಕರಣಕ್ಕೆ ಬಳಸಿದ್ದ ಮನೆಯ ವಿವಾದ ಮತ್ತೆ ಕಿಚ್ಚ ಸುದೀಪ್ ಕೊರಳಿಗೆ ಸುತ್ತಿಕೊಂಡಿದೆ.

ಈ ಧಾರವಾಹಿಗೆ ಬಳಸಿದ್ದ ಚಿಕ್ಕಮಗಳೂರಿನ ಮನೆ ಮತ್ತು ಕಾಫಿ ಎಸ್ಟೇಟ್ ಲೊಕೇಶನ್ ನಲ್ಲಿ ಶೂಟಿಂಗ್ ನಡೆಸಿ ಪರಿಸರಕ್ಕೆ ಹಾನಿ ಮಾಡಿದ್ದಾರೆ ಎಂದು ಹಿಂದೊಮ್ಮೆ ತಕರಾರು ತೆಗೆದಿದ್ದ ಮಾಲಿಕ ದೀಪಕ್ ಮಯೂರ್ ಇದೀಗ ಮತ್ತೊಮ್ಮೆ ಸುದೀಪ್ ವಿರುದ್ಧ ಸಿಡಿದೆದ್ದಿದ್ದಾರೆ.

ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಈ ಧಾರವಾಹಿ ಪ್ರಸಾರವಾಗಿತ್ತು. ಹೀಗಾಗಿ ಶೂಟಿಂಗ್ ಲೊಕೇಶನ್ ಗೆ ಹಾನಿ ಮಾಡಿದ್ದಾರೆ ಮತ್ತು ಹಣ ಕೊಡದೇ ಶೂಟಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಎಸ್ಟೇಟ್ ಮಾಲಿಕ ದೀಪಕ್ ಇದೀಗ ಸಿಎಂ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದು ಕಿಚ್ಚ ಸುದೀಪ್ ಅವರ ಚೊಚ್ಚಲ ನಿರ್ಮಾಣದ ಧಾರವಾಹಿ ಆಗಿತ್ತು. ಈ ದೂರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ಏನಿರುತ್ತದೆ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ