ವಿಷ್ಣು ಸಮಾಧಿ ನೆಲಸಮ: ಅಭಿಮಾನಿಗಳ ಆಕ್ರೋಶದ ಬೆನ್ನಲ್ಲೇ ದಿಢೀರ್‌ ಪತ್ರಿಕಾಗೋಷ್ಠಿ ಕರೆದ ಅನಿರುದ್ಧ್‌

Sampriya

ಶನಿವಾರ, 9 ಆಗಸ್ಟ್ 2025 (15:40 IST)
ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸದ ಸಂಬಂಧ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಇದೀಗ ಅನಿರುದ್ಧ ಅವರು ದಿಢೀರನೇ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. 

ರಾತ್ರೋರಾತ್ರಿ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿರುವುದು ಅವರ ಅಭಿಮಾನಿಗಳಿಗೆ ಭಾರೀ ನೋವುಂಟು ಮಾಡಿದೆ. ಈ ಹಿನ್ನೆಲೆ ಆ ಸ್ಥಳಕ್ಕೆ ಬಂದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. 

ಕೆಲ ನಟ ನಟಿಯರು ಕೂಡಾ ವಿಷ್ಣು ಸಮಾಧಿ ತೆರವು ಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಶ್ರುತಿ ಅವರು ಪ್ರತಿಕ್ರಿಯಿಸಿ, ನನ್ನ ಜಾಮೀನು ಆದರೂ ನೀಡುತ್ತಿದ್ದೆ. ದೇವರ ಕೋಣೆಯಲ್ಲಿ ಪೂಜಿಸುವ ವ್ಯಕ್ತಿಗೆ ಅಷ್ಟು ಮಾಡಲ್ವ. ಆ ಜಾಮೀನು ವಿವಾದ ಗೊತ್ತೇ ಇರಲಿಲ್ಲ ಎಂದು ನೋವು ವ್ಯಕ್ತಪಡಿಸಿದ್ದರು. 

ಇಷ್ಟೇಲ್ಲ ಬೆಳವಣಿಗೆಯಾದರು ವಿಷ್ಣುವರ್ಧನ್ ಅವರ ಕುಟುಂಬ ಮಾತ್ರ ಪ್ರತಿಕ್ರಿಯಿಸಿರಲಿಲ್ಲ. ಇದೀಗ ದಿಢೀರನೇ ಸಂಜೆ ನಾಲ್ಕು ಗಂಟೆಗೆ ಅನಿರುದ್ಧ್‌ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಭಾರೀ ಕುತೂಹಲವನ್ನು ಮೂಡಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ