ಜತಿ ರತ್ನಲು ಸೀಕ್ವೆಲ್ ಬಗ್ಗೆ ನಿರ್ದೇಶಕರು ಹೇಳಿದ್ದೇನು?

ಶುಕ್ರವಾರ, 19 ಮಾರ್ಚ್ 2021 (12:38 IST)
ಹೈದರಾಬಾದ್ : ಇತ್ತೀಚೆಗಷ್ಟೇ ಬಿಡುಗಡೆಯಾದ ‘ಜತಿ ರತ್ನಲು’ ಚಿತ್ರ ವೀಕ್ಷಕರ ಮನಗೆದ್ದು ಗಲ್ಲಾ ಪೆಟ್ಟಿಯಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಈ ಚಿತ್ರದ ಸೀಕ್ವೆಲ್ ತೆಗೆಯಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಚಿತ್ರ ಈಗಾಗಲೇ 40 ಕೋಟಿ ರೂ.ಗಳನ್ನು ಸಂಗ್ರಹ ಮಾಡಿದೆ. ಹೀಗಾಗಿ ಇತ್ತೀಚೆಗೆ ನಿರ್ಮಾಪಕರು ಅದ್ದೂರಿ ಸಕ್ಸಸ್ ಪಾರ್ಟಿಯನ್ನು  ಆಯೋಜಿಸಿದ್ದರು. ಆ ವೇಳೆ ನಿರ್ಮಾಪಕರು ಜತಿ ರತ್ನಲು ಚಿತ್ರದ ಸೀಕ್ವೆಲ್ ತೆಗೆಯುವ ಸುಳಿವು ನೀಡಿದ್ದಾರೆ.

ಈ ಚಿತ್ರದ ಸೀಕ್ವೆಲ್ ನ್ನು ತೆಗೆಯುವುದಾಗಿ ನಿರ್ದೇಶಕ ಅನುದೀಪ್ ಕೆ.ವಿ. ತಿಳಿಸಿದ್ದಾರೆ. ಈ ಬಗ್ಗೆ ‍ಶೀಘ್ರದಲ್ಲಿಯೇ ಪ್ರಕಟಣೆ ನೀಡಲಾಗುವುದು ಮತ್ತು ಇದರ ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ