ಇಂದು ಶಿವಮೂರ್ತಿ ವಿರುದ್ಧದ 2ನೇ ಕೇಸ್ ತೀರ್ಪು

ಸೋಮವಾರ, 20 ನವೆಂಬರ್ 2023 (15:00 IST)
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ದದ 2ನೇ ಫೋಕ್ಸೋ ಕೇಸ್ ಹಿನ್ನೆಲೆಯಲ್ಲಿ, ಶಿವಮೂರ್ತಿ ಶರಣರಿಗೆ ಮತ್ತೆ ಬಂಧನದ ವಾರೆಂಟ್ ಕೊಡುವ ಸಂಬಂಧ ಇಂದು ಕೋರ್ಟ್​ ತನ್ನ ತೀರ್ಪು ನೀಡಲಿದೆ. ನವೆಂಬರ್ 16ರಂದು ಶಿವಮೂರ್ತಿ ಶರಣರಿಗೆ ಬಂಧನ ವಾರೆಂಟ್​ ಹೊರಡಿಸುವಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಈಗಾಗಲೇ 2ನೇ ಫೋಕ್ಸೋ ಕೇಸ್ ವಿಚಾರಣೆಗೆ ಹೈ ಕೋರ್ಟ್​ ತಡೆಯಾಜ್ಞೆ ನೀಡಿದೆ.

ಹಾಗಾಗಿ ಶಿವಮೂರ್ತಿ ಶರಣರಿಗೆ ಬಂಧನದ ವಾರೆಂಟ್​ ನೀಡುವ ಅಗತ್ಯವಿಲ್ಲವೆಂದು ಶಿವಮೂರ್ತಿ ಶರಣರ ಪರ ವಕೀಲ ಉಮೇಶ್ ಪ್ರತಿವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಕೋಮಲ, ಹೈ ಕೋರ್ಟ್​ ನಿಂದ ಸ್ಪಷ್ಟನೆ ತರುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು. ಅಲ್ಲದೆ ಶಿವಮೂರ್ತಿ ಶರಣರು ಚಿತ್ರದುರ್ಗ ಪ್ರವೇಶಿಸುವಂತಿಲ್ಲ ಎಂಬ ಶರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ