ಕೊರೊನಾಗೆ ರಾಜ್ಯದಲ್ಲಿ 3 ನೇ ಸಾವು : ಜನರಲ್ಲಿ ಹೆಚ್ಚಿದ ಆತಂಕ

ಶುಕ್ರವಾರ, 27 ಮಾರ್ಚ್ 2020 (13:40 IST)
ರಾಜ್ಯದಲ್ಲಿ ಕೊರೊನಾ ವೈರಸ್ ನಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 3 ಕ್ಕೆ ಏರಿಕೆಯಾದಂತಾಗಿದೆ.

ಮಹಾಮಾರಿ ಕೊರೊನಾಗೆ ತುಮಕೂರಿನ ಸಿರಾ ನಗರದ 65 ವರ್ಷದ ವಯೋವೃದ್ಧ ಸಾವನ್ನಪ್ಪಿದ್ದಾರೆ. ದೆಹಲಿಗೆ ಪ್ರಯಾಣಿಸಿದ್ದ ಮೃತ ವ್ಯಕ್ತಿಯ ಜೊತೆಗೆ 13 ಜನರಿದ್ದರು. ಮರಳಿ ಬಂದಾಗ ಮಾರ್ಚ್ 18 ರಂದು ಜ್ವರ ಕಾಣಿಸಿಕೊಂಡಿತ್ತು.


ಮಾ. 24 ರಂದು ಹೆಚ್ಚಿನ ಪರೀಕ್ಷೆಗೆ ಕಳಿಸಲಾಗಿತ್ತು ಎನ್ನಲಾಗಿದೆ. ಐಸೋಲೇಷನ್ ವಾರ್ಡ್ ನಲ್ಲಿ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ವೃದ್ಧನ ಮನೆಯಲ್ಲಿದ್ದವರನ್ನು ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ