ಕೊರೊನಾ ಭೀತಿ ಹಿನ್ನಲೆ ಗ್ರಾಮಕ್ಕೆ ಬೇಲಿ ಹಾಕಿದ ಗ್ರಾಮಸ್ಥರ ಮೇಲೆ ದರ್ಪ ತೋರಿಸಿದ ಜೆಡಿಎಸ್ ಮುಖಂಡ

ಶುಕ್ರವಾರ, 27 ಮಾರ್ಚ್ 2020 (10:13 IST)
ಮಧುಗಿರಿ : ಕೊರೊನಾ ಭೀತಿ ಹಿನ್ನಲೆಯಲ್ಲಿ ಗ್ರಾಮಕ್ಕೆ ಬೇಲಿ ಹಾಕಿದ  ಗ್ರಾಮಸ್ಥರ ಮೇಲೆ ಜೆಡಿಎಸ್ ಮುಖಂಡ ದರ್ಪ ತೋರಿದ ಘಟನೆ ಮಧುಗಿರಿ ತಾಲೂಕಿನ ತಿಮ್ಮಾಪುರದಲ್ಲಿ ನಡೆದಿದೆ.


ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಮಧುಗಿರಿ ತಾಲೂಕಿನ ತಿಮ್ಮಾಪುರದಲ್ಲಿ ಊರೊಳಗೆ ಯಾರು ಪ್ರವೇಶ ಮಾಡಬಾರದೆಂದು ಗ್ರಾಮಸ್ಥರು ಇಡೀ ಗ್ರಾಮಕ್ಕೆ ಬೇಲಿ ಹಾಕಿದ್ದಾರೆ.


ಇದರಿಂದ ಆಕ್ರೋಶಗೊಂಡ ಜೆಡಿಎಸ್ ಮುಖಂಡ ಕಾಂತರಾಜು, ಗ್ರಾಮಸ್ಥರನ್ನು ನಿಂದಿಸಿ ಬೇಲಿಗೆ ಬೆಂಕಿ ಹಚ್ಚಿದ್ದಾರೆ. ಜೆಡಿಎಸ್ ಮುಖಂಡರ  ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ