ಆರೋಪಿಗಳ ಮೇಲೆ ದಾಖಲಾಯ್ತು ಕೊಲೆಯತ್ನ ಕೇಸ್

ಶನಿವಾರ, 12 ಆಗಸ್ಟ್ 2023 (15:46 IST)
ಬಾಡಿಗೆ ಕೇಳಿದ್ದಕ್ಕೆ ಮಹಿಳೆಯ ಮುಖ ಹಾಗೂ ಕೈಗೆ ಚಾಕು ಇರಿದ ಪ್ರಕರಣದ ಆರೋಪಿಗಳ ಮೇಲೆ IPC ಸೆಕ್ಷನ್ 307ರ ಅಡಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ನಿನ್ನೆಯಷ್ಟೇ ಪೊಲೀಸರು ಆರೋಪಿಗಳ ಪರವಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. ವರದಿ ನೋಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್​ ಗುಪ್ತಾ ಬಂಡೆಪಾಳ್ಯ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಂಡೆಪಾಳ್ಯ ಪೊಲೀಸರು ಸದ್ದಾಂ ಹಾಗೂ ನಜೀರ್ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಶ್ರೀದೇವಿ ಎಂಬ ಮಹಿಳೆ ಬಾಡಿಗೆ ಕೇಳಿದ್ದಕ್ಕೆ ಸದ್ದಾಂ ಹಾಗೂ ನಜೀರ್ ಶ್ರೀದೇವಿಯ ಮುಖ ಕೂಯ್ದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ