ಎಮ್ಮೆಗೆ ಸ್ನಾನ ಮಾಡಿಸಲು ಹೋಗಿ ಯುವಕ ಸಾವು

ಮಂಗಳವಾರ, 25 ಜುಲೈ 2023 (19:25 IST)
ನದಿಯಲ್ಲಿ ಎಮ್ಮೆ ತೊಳೆಯಲು ಹೋದವನು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದ ಬಳಿ ನಡೆದಿದೆ. 24 ವರ್ಷದ ಯಮನಪ್ಪ ಬಂಡಿವಡ್ಡರ ಎಂಬಾತ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಧರ್ಮಾ ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸಲು ತೆರಳಿದ್ದಾನೆ. ಈ ವೇಳೆ ಆಕಸ್ಮಿತವಾಗಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ