ಬೆಡ್ ಬ್ಲಾಕಿಂಗ್ ದಂಧೆ ವಿರುದ್ಧ ನಟಿ ತಾರಾ ಆಕ್ರೋಶ
ಈ ದಂಧೆಯಲ್ಲಿ ತೊಡಗಿದವರ ವಿರುದ್ಧ ನಿರ್ಲಕ್ಷ, ಭ್ರಷ್ಟಾಚಾರ ಪ್ರಕರಣವಲ್ಲ, ಜನರನ್ನು ಕೊಲೆ ಮಾಡಿದ ಪ್ರಕರಣ ದಾಖಲಿಸಬೇಕು. ಇಂತಹ ಒಂದು ದಂಧೆ ನಡೆದಿರುವುದು ನಿಜಕ್ಕೂ ಖೇದಕರ. ಈ ಪ್ರಕರಣವನ್ನು ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಬಲಿಗರನ್ನು ಅಭಿನಂದಿಸುತ್ತೇನೆ. ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ಭರವಸೆಯಿದೆ ಎಂದಿದ್ದಾರೆ.