ಪ್ರವೀಣ್ ಕೇಸ್ ಗೆ ಸಂಬಂಧಪಟ್ಟಂತೆ 2- 3 ದಿನಗಳಲ್ಲಿ ಅಪರಾಧಿಯ ಬಂಧನ-ಅರಗ ಜ್ಞಾನೇಂದ್ರ

ಗುರುವಾರ, 4 ಆಗಸ್ಟ್ 2022 (21:05 IST)
ಪ್ರವೀಣ್ ಕೇಸ್ ನಲ್ಲಿ  ತನಿಖೆ ನಡೆಯುತ್ತಿದ್ದು, ಯಾರು ಕೊಲೆ ಮಾಡಿದ್ದಾರೆ ನಮಗೆ ಅಂತ ಗೊತ್ತಾಗಿದೆ. ಎರಡ್ಮೂರು ದಿನಗಳಲ್ಲಿ ಬಂಧನ‌ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ರು, ಈ ವೇಳೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಮಾಡಿವ್ರನ್ನ ಹಿಡಿಯೋ ಕೆಲಸ ಆಗ್ತಿದೆ. ಒಂದು ಕಡೆ ಅವ್ರು ನಿಂತಿಲ್ಲ, ಬೇರೆ ಬೇರೆ ಸ್ಥಳಕ್ಕೆ ಹೋಗ್ತಿದ್ದಾರೆ. ಇನ್ನೂ ನಮ್ಮ ಪೊಲೀಸರು ಅವ್ರ ಬೆನ್ನು ಹತ್ತಿದ್ದಾರೆ. ಆದಷ್ಟು ಬೇಗ ಅವ್ರ ಬಂಧನವೂ ಆಗಲಿದೆ ಎಂದ್ರು, ಇನ್ನೂಫಾಝಿಲ್ ಕೇಸ್ ನಲ್ಲೂ ಹತ್ಯೆ ಯಾರು ಮಾಡಿದ್ದಾರೆ ಅಂತ ಗೊತ್ತಾಗಿದೆ,ಅವ್ರನ್ನ ಹಿಡಿಯೋ ಕೆಲಸ ಆಗುತ್ತೆ ತನಿಖೆ ಹಂತದಲ್ಲಿ ಇರೋದ್ರೀಂದ ಬೇರೆ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ