ಹಿಂದು ಸಂಘಟನೆಗಳಿಂದಲೇ ಹತ್ಯೆಗಳಾಗುತ್ತಿವೆ: ಸಚಿವ ರಮಾನಾಥ್ ರೈ

ಭಾನುವಾರ, 7 ಜನವರಿ 2018 (12:26 IST)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳು ಹಿಂದು ಸಂಘಟನೆಗಳಿಂದಲೇ ನಡೆಯುತ್ತಿವೆ ಎಂದು ಸಚಿವ ರಮಾನಾಥ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರೈ, ಬಶೀರ್ ಹತ್ಯೆಯ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಗೆ ಹಿಂದು ಸಂಘಟನೆಗಳ ನಂಟಿದೆ ಎಂದು ಕಿಡಿಕಾರಿದ್ದಾರೆ.
 
47 ವರ್ಷ ವಯಸ್ಸಿನ ಬಶೀರ್ ಎನ್ನುವವರನ್ನು ಆರೋಪಿಗಳು ಹತ್ಯೆ ಮಾಡಿದ್ದು, ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು.
 
ಸಚಿವ ರಮಾನಾಥ್ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಿಂದು ಸಂಘಟನೆಗಳಿಂದಲೇ ಹತ್ಯೆಗಳಾಗುತ್ತಿವೆ ಎಂದು ಕಿವಿ ತುಂಬುತ್ತಿರುವುದು ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ