ಗೃಹ ಜ್ಯೋತಿ ಯೋಜನೆ ಪಡೆದುಕೊಳ್ಳಲು ಫಲಾನುಭವಿಗಳು ಪರದಾಟ

ಭಾನುವಾರ, 18 ಜೂನ್ 2023 (19:00 IST)
ಏಕಕಾಲದಲ್ಲಿ ಹಲವು ಕಡೆ ಅರ್ಜಿ ಸಲ್ಲಿಸಲು ಮುಂದಾದ ಕಾರಣಕ್ಕೋ ಏನೋ ಸೇವಾ ಸಿಂಧು ಪೋರ್ಟಲ್‌ ನಲ್ಲಿ ಗೃಹ ಜ್ಯೋತಿ ಯೋಜನೆ ಪಡೆಯಲು ಫಲಾನುಭವಿಗಳು ಪೋರ್ಟಲ್‌ ನಲ್ಲಿ ಓಪನ್ ಆಗದೆ ಪರದಾಡುವ ಸ್ಥಿತಿ ಉಂಟಾಗಿತ್ತು. ಮಲ್ಲೇಶ್ವರಂ ಬೆಂಗಳೂರು ಒನ್ ಕಚೇರಿಯಲ್ಲಿ ಸೇವಾ ಸಿಂಧು ಪೋರ್ಟಲ್ ಓಪನ್‌ ಆಗದೆ ಜನರು ತೊಂದರೆ ಅನುಭವಿಸಿ, ಸರ್ಕಾರದ ವಿರುದ್ದ ಕಿಡಿಕಾಡಿದ್ದಾರೆ.ಇಂದಿನಿಂದ ಶುರುವಾಗಿರೊ ಈ  ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ, ಆಗಿದ್ರೂ ಕೂಡಾ ಜನರು ಕ್ಯೂ ನಿಂತು ಅರ್ಜಿ ಸಲ್ಲಿಸೋಕೆ ಮುಗಿಬಿಳುತ್ತಿರುವಂತದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್,ವಿದ್ಯುತ್​ ಕಚೇರಿಗಳಲ್ಲಿ,ವಿದ್ಯುತ್ ಬಿಲ್ ಜೊತೆ ಆಧಾರ್ ಕಾರ್ಡ್,ಹಿಡಿದು ಅರ್ಜಿ ಸಲ್ಲಿಸಿ ಇದರ ಫಲ ಪಡೆದು ಕೊಳ್ಳಲು ಜನರು ತುದಿಗಾಲ್ಲಿದ್ದಾರೆ 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ