ನಿರ್ಮಾಪಕ ಸೌಂದರ್ಯ ಜಗದೀಶ್ ಹಲ್ಲೆ ಪ್ರಕರಣಕ್ಕೆ ಯೂಟರ್ನ್ ...!!!

ಗುರುವಾರ, 28 ಅಕ್ಟೋಬರ್ 2021 (17:05 IST)
ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬಸ್ಥರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ಪರ ನಿಂತಿದ್ದ ಉದ್ಯಮಿ ಮಂಜುಳಾ ಹೇಳಿಕೆ ನೀಡಿದ್ದಾರೆ. ನಮ್ಮ ಕೆಲಸದಾಕೆ ಮೇಲೆ ಹಲ್ಲೆಯಾಗಿದ್ದಕ್ಕೆ ದೂರು ನೀಡಿದ್ವಿ. ಇನ್ನೂ ಯಾರನ್ನೂ ಬಂಧಿಸಿಲ್ಲ. ಒತ್ತಡ ಜಾಸ್ತಿಯಾಗ್ತಿದೆ.ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಅಂತ ದೂರು ಕೊಟ್ಟಿದ್ವಿ ಎಂದಿದ್ದಾರೆ. ಖುದ್ದು ನಿರ್ಮಾಪಕ ಸೌಂದರ್ಯ ಜಗದೀಶ್ ,ಕೈಮುಗಿದು ಕ್ಷಮೆ ಕೇಳಿದ್ದಾರೆ. ಸ್ನೇಹಿತ್ ಈ ಘಟನೆಯಿಂದ ಪಾಠ ಕಲೀತಾನೆ.
 
ರೇಖಾ‌ ಮತ್ತು ಸ್ನೇಹಿತ್ ಇಬ್ಬರು ಜಗಳ ಬಿಡಿಸಲು ಬಂದಿದ್ರು.ಅವರಿಗೂ ಗಲಾಟೆಗೂ ಸಂಬಂಧವಿಲ್ಲ. ಸಿಸಿಟಿವಿ ಫುಟೇಜ್ ವೆರಿಫೈ ಮಾಡಲು ಪೊಲೀಸರಿಗೆ ಹೇಳಿದ್ದೆ. ಅವರಿಬ್ಬರು ಜಗಳ ಬಿಡಿಸಲು ಬಂದಿದ್ದರು ಎಂಬುದು ಗೊತ್ತಾಗಿದೆ. ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ, ಅವರಿಬ್ಬರ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸಿದ್ದೇವೆ. ಯಾವುದೇ ಒತ್ತಡ,ಮುಲಾಜಿಗೆ ಬಗ್ಗಿಲ್ಲ. ಸ್ನೇಹಿತ್ ನ ಭವಿಷ್ಯದ ದೃಷ್ಟಿಯಿಂದ ಅವರ ಹೆಸರನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಯುವತಿಗೆ ಹೊಡೆದವರಿಗೆ ಖಂಡಿತ ಶಿಕ್ಷೆಯಾಗಲಿ ಎಂದವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ