ಜಗಳ ತಾರಕಕ್ಕೇರಿ ಅತ್ತಿಗೆಯ ಕತ್ತು ಕೊಯ್ದ ಮೈದುನ..!

ಬುಧವಾರ, 1 ನವೆಂಬರ್ 2017 (14:36 IST)
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮೈದುನನೇ ಅತ್ತಿಗೆಯ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.

ಸರೋಜಾ ಎಂಬಾಕೆ ಹತ್ಯೆಯಾದ ಮಹಿಳೆ. ಸರೋಜ ತನ್ನ ಪತಿ ಸಾವಿನ ಬಳಿಕ ಮೈದುನ ನಟರಾಜ್ ಜತೆ ಅನೈತಿಕ‌ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಸೋಮವಾರ ರಾತ್ರಿ ಇಬ್ಬರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದ್ದು, ನಿನ್ನೆ ಬೆಳಗ್ಗೆ ನಟರಾಜ್ ಸರೋಜಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿ ನಟರಾಜನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ